Feedback / Suggestions

Jain

ಜೈನ್ ಸಮುದಾಯದ ಅಭಿವೃದ್ಧಿ

ರಾಜ್ಯದಲ್ಲಿನ ಜೈನ್ ಅಲ್ಪಸಂಖ್ಯಾತರ ಸಮುದಾಯವನ್ನು ಪ್ರೋತ್ಸಾಹಿಸುವ ಉದ್ದೇಶದಲ್ಲಿ ಜೈನ್ ದೇವಾಲಯ (ಬಸದಿಗಳ ನವೀಕರಣ/ ದುರಸ್ಥಿ/ ಜೀರ್ಣೋದ್ಧಾರಕ್ಕಾಗಿ ಕೈಗೊಳ್ಳುವುದು ಮೂಲಕ ಧಾರ್ಮಿಕ ಸ್ವತ್ತುಗಳ ಸಂರಕ್ಷಣೆಗಾಗಿ ಮತ್ತು ಉತ್ತಮ ಸ್ಥಿತಿಯಲ್ಲಿ ಕಾಪಾಡುವುದು ಅಗತ್ಯವೆಂದು ಕಂಡು ಬಂದಿದೆ ಮತ್ತು ಈ ಉದ್ದೇಶಕ್ಕಾಗಿ ಅರ್ಹ ಜೈನ್ ದೇವಾಲಯ (ಬಸದಿ)ಗಳಿಗೆ ಸಹಾಯಾನುದಾನವನ್ನು ನೀಡಲು ರಾಜ್ಯದ ಆಯವ್ಯಯದಲ್ಲಿ ಅನುದಾನ ನಿಗಧಿಪಡಿಸಲಾಗಿದೆ. ಸದರಿ ಕಾರ್ಯಕ್ರಮದಡಿ ಇಚ್ಛೆಯುಳ್ಳ ಜೈನ್ ದೇವಾಲಯ (ಬಸದಿ)ಗಳ ವ್ಯವಸ್ಥಾಪನ/ ಜೀರ್ಣೋದ್ಧಾರ ಸಮಿತಿಯವರು ಅನುದಾನ ಪಡೆಯಲು ಮುಂದೆ ಬಂದಲ್ಲಿ ಅಂಥಹ ದೇವಾಲಯ/ ಬಸದಿಗಳಗೆ ಅನುದಾನ ಬಿಡುಗಡೆ ಮಾಡಲು ಈ ಕೆಳಕಂಡ ಅರ್ಹತೆಯನ್ನು ಹೊಂದಿರಬೇಕು.

ಅರ್ಹತೆಗಳು:

  • ನಿಗದಿತ ನಮೂನೆಯಲ್ಲಿ ಅರ್ಜಿ (ನಮೂನೆ-1).
  • ದೇವಾಲಯ/ ಸಂಸ್ಥೆಯ ನೊಂದಣಿ ಪ್ರಮಾಣ ಪತ್ರ (ಭಾರತೀಯ ನ್ಯಾಸ ಅಧಿನಿಯಮ) ಅಥವಾ ಕರ್ನಾಟಕ ಸಂಘ ಸಂಸ್ಥೆಗಳ ನೊಂದಣಿ ಅಧಿನಿಯಮದ ಮೇರೆಗೆ ನೊಂದಾವಣೆಯಾಗಿರಬೇಕು ಅಥವಾ ಸಂಬಂಧಪಟ್ಟ ತಾಲ್ಲೂಕಿನ ತಹಸಿಲ್ದಾರರಿಂದ ದೇವಾಲಯ/ ಬಸದಿ ಇರುವ ಬಗ್ಗೆ ಪ್ರಮಾಣ ಪತ್ರ ಸಲ್ಲಿಸಬೇಕು. (ನಮೂನೆ-2).
  • ಒಂದು ವರ್ಷದ ಆಡಿಟ್ ರಿಪೋರ್ಟ (ಚಾಟ್ಟೇಡ್ ಅಕೌಂಟೆಂಟ್ ರಿಂದ ತಯಾರಿಸಿರಬೇಕು) ವಾರ್ಷಿಕ ಲೆಕ್ಕ ಪತ್ರ ವರದಿ.
  • ಅಂದಾಜು ಪಟ್ಟಿ (ದೇವಸ್ಥಾನದ ವ್ಯಾಪ್ತಿಗೆ ಬರುವ ಸ್ಥಳೀಯ ಸರ್ಕಾರಿ ಅಭಿಯಂತರರು ಅಥವಾ ಇತರೆ ಅನುಮೋದಿತ ಅಭಿಯಂತರರು).
  • ದೇವಾಲಯ/ವ್ಯವಸ್ಥಾಪನಾ ಸಮಿತಿ ಹೆಸರಿನಲ್ಲಿ ನಿವೇಶನ ಪತ್ರ.
  • ದೇವಾಲಯ ಆಡಳಿತಕ್ಕೆ ವಿದ್ಯುಕ್ತವಾಗಿ ಚುನಾಯಿತಗೊಂಡ ಆಡಳಿತ ಮಂಡಳಿ ಪಟ್ಟಿ.
  • ಜಿಲ್ಲಾ ಅಧಿಕಾರಿಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆರವರ ಸ್ಥಳ ತನಿಖಾ ವರದಿ. (ನಮೂನೆ-3)
  • ದೇವಾಲಯದ ಛಾಯಾ ಚಿತ್ರಗಳನ್ನು ಹಿಂಬದಿಯಲ್ಲಿ ಜಿಲ್ಲಾ ಅಧಿಕಾರಿಗಳು ದೃಢೀಕರಿಸಿರಬೇಕು.
  • ಮುಚ್ಚಳಿಕೆ ಪತ್ರ.
  • ಈ ಯೋಜನೆಯಡಿ ಅನುದಾನ ಪಡೆಯುವ ದೇವಾಲಯ/ಬಸದಿ ಮುಜರಾಯಿ ಇಲಾಖೆಯಿಂದ ಇದೇ ಉದ್ದೇಶಕ್ಕೆ ಅನುದಾನ ಪಡೆಲಾಗಿದೆಯೇ/ಇಲ್ಲವೇ ಎಂಬ ಬಗ್ಗೆ ಸ್ಥಳೀಯ ತಹಸಿಲ್ದಾರ ಕಚೇರಿಯಿಂದ ದೃಢೀಕರಣ ಪಡೆದು ಸಲ್ಲಿಸುವುದು.

ಅನುದಾನದ ವಿವರ:

ಅನುದಾನದ ಲಭ್ಯತೆಯನ್ನಾಧಾರಿಸಿ ಪ್ರತಿ ಜೈನ ದೇವಾಲಯ (ಬಸದಿ)ಗೆ ಅಂದಾಜು ವೆಚ್ಚದ ಶೇ. 50% ರಷ್ಟ ಅಥವಾ ಗರಿಷ್ಠ ರೂ. 10.00 ಲಕ್ಷ ಯಾವುದು ಕಡಿಮೆಯೂ ಅನುದಾನ.

ಅರ್ಜಿ ಸಲ್ಲಿಸುವ ವಿಧಾನ :

  • ಜೈನ ದೇವಾಲಯ (ಬಸದಿ) ಮುಖ್ಯಸ್ಥರು ನಿಗಧಿತ ನಮೂನೆಯಲ್ಲಿ ಅರ್ಜಿಯನ್ನು ಸಂಬಂಧಪಟ್ಟ ಜಿಲ್ಲೆಯ ಜಿಲ್ಲಾ ಅಧಿಕಾರಿಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ರವರಿಗೆ ದಾಖಲಾತಿಗಳೊಂದಿಗೆ ಪ್ರಸ್ತಾವನೆಯನ್ನು ಸಲ್ಲಿಸುವುದು.
  • ಜಿಲ್ಲಾ ಅಧಿಕಾರಿಗಳು, ಸದರಿ ದೇವಾಲಯದ ಸ್ಥಳ ತನಿಖೆ ನಡೆಸಿ ದಾಖಲಾತಿಗಳನ್ನು ಪರಿಶೀಲಿಸಿ, ಸ್ಪಷ್ಠ ಶಿಫಾರಸ್ಸಿನೊಂದಿಗೆ ಪ್ರಸ್ತಾವನೆಯನ್ನು ನಿರ್ದೇಶನಾಲಯಕ್ಕೆ ಸಲ್ಲಿಸುವುದು.
  • ನಿರ್ದೇಶನಾಲಯದಿಂದ ಪ್ರಸ್ತಾವನೆಯ್ನು ಪರಿಶೀಲಿಸಿ, ಜೈನ್ ದೇವಾಲಯ (ಬಸದಿ) ಗಳಿಗೆ ಸಹಾಯಾನುದಾನ ಕಾರ್ಯಕ್ರಮದಡಿ ಸೂಕ್ತ ಶಿಫಾರಸ್ಸಿನೊಂದಿಗೆ ಸರ್ಕಾರಕ್ಕೆ ಅನುದಾನ ಬಿಡುಗಡೆಗಾಗಿ ಕಡತವನ್ನು ಸರ್ಕಾರಕ್ಕೆ ಸಲ್ಲಿಸುವುದು.

Last Updated: 29-06-2021 06:38 PM Updated By: DISTRICT OFFICER


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : MINORITY WELFARE DEPARTMENT VIJAYAPURA
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080